ಏಕೆ ಕಡೆಗಣ್ಣಿಂದ ನೋಡುವೆ

  1 min read
  August 28, 2022
  krushna, purandaradasa


ಹಲವು ಕಾಲದಿ ನಿನ್ನ ಹಂಬಲವು ಎನಗೆ ಕೃಷ್ಣ
ಒಲಿದು ಪಾಲಿಸಬೇಕು ವಾರಿಜನಾಭ

ಕೆಳಗೆ ನೀ ನೂಕಿದರೆ ಇನ್ನಾರು ಸಲಹುವರೋ
ಛಲವ ಬಿಟ್ಟು ಕಾಯೋ ಪುರಂದರ ವಿಠ್ಠಲ

ಏಕೆ ಕಡೆಗಣ್ಣಿಂದ ನೋಡುವೆ
ನೀ ಕರುಣಾಕರನಲ್ಲವೆ ಹರಿಯೇ

ಭಕ್ತವತ್ಸಲನಲ್ಲವೇ ಕೃಷ್ಣ
ಚಿತ್ಸುಖದಾತ ನೀನಲ್ಲವೇ
ಅತ್ಯಂತ ಅಪರಾಧಿ ನಾನಾದೊಡೆನಯ್ಯ
ಇತ್ತಿತ್ತ ಬಾ ಎನ್ನಬಾರದೇ

ದೋಷಿಯು ನಾನಾದೊಡೆನಯ್ಯ ಕೃಷ್ಣ
ಸರ್ವ ದೋಷರಹಿತನು ನೀನಲ್ಲವೆ
ಘಾಸಿಯಾತಕೊ ಕೃಷ್ಣ ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀ ಪುರಂದರ ವಿಠ್ಠಲ

Performance by Stuti Bhat

https://www.youtube.com/watch?v=BoXAdQ3Cblo